ಮರುಪಯಣ

Author : ಕೃಷ್ಣಾನಂದ ಕಾಮತ್

Pages 124

₹ 75.00




Year of Publication: 2001
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮೀ ಭವನ, ಸುಭಾಸ್ ರೋಡ್, ಧಾರವಾಡ-580001

Synopsys

‘ಮರುಪಯಣ’ ಕೃತಿಯು ಕೃಷ್ಣಾನಂದ ಕಾಮತ್ ಅವರ ಅನುಭವ ಕಥನವಾಗಿದೆ. ಮರುಪಯಣ ಕೃತಿಯ ಶೀರ್ಷಿಕೆಯಡಿ 21 ಅಧ್ಯಾಯಗಳಿದ್ದು, ನಾಂದಿ, ಒಮ್ಮತ, ಅನಾಥರಾದಾಗ, ಕಾರ್ಯವಿಧಾನ, ಅನ್ಯಾಯ, ರಾಣಿಯ ರಾಜ್ಯದಲ್ಲಿ, ಬೆಕ್ಕಿನ ಬೇರೆ ಬಿಡಾರ, ಕಣ್ಮೆರೆಯಾದ ಕೆರೆ, ಕರ್ನಲ್ ಹಿಲ್, ಹಿರೇಹಳ್ಳಿ, ಕಲೆಗಳ ಆಗರ, ಶರಾವತಿಯ ಸಾನ್ನಿಧ್ಯ, ದ್ವೀಪಗಳ ರಾಣಿ, ಹೊಸತು ಹೊಸತು, ಊರ ಹೊಲಸು, ಪರ್ಣ ಸಂಸ್ಕೃತಿ, ಮಾಯವಾದ ವನರಾಜಿ, ವೃತ್ತಿ ಜೀವನ, ಮತ್ಸ್ಯಾವತಾರ, ಉದ್ಯೋಗ ಪರ್ವ, ಮರುಪಯಣ ಇವೆಲ್ಲವನ್ನು ಒಳಗೊಂಡಿದೆ. 

ಕೃತಿಯ ಹಿನ್ನಲೆಯನ್ನು ವಿಶ್ಲೇಷಿಸಿರುವ ಕೃಷ್ಣಾನಂದ ಕಾಮತರು, ಈ ಕೃತಿ ಕೇವಲ ನಡೆದ ಘಟನೆಗಳ ವರದಿಯಲ್ಲ. ಕಾಲ್ಪನಿಕ ಕಥನವೂ ಅಲ್ಲ. ನಡೆಯುತ್ತಲೇ ಇರುವ ಜೀವನ ವ್ಯಾಪಾರಗಳ ಮೌಲ್ಯಮಾಪನದ ಪ್ರಯತ್ನಗಳಾಗಿವೆ. ಮುಂದೆ ನಾವೆಲ್ಲರೂ ಎದುರಿಸಬೇಕಾಗಿ ಬರಲಿರುವ ಪೇಚುಗಳ ಎಚ್ಚರಿಕೆಯ ಮಾತಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ವ್ಯಕ್ತಿಗಳು, ಸಮಾಜ, ಸರಕಾರಗಳೆಲ್ಲ ಒಟ್ಟಾಗಿಯೇ ಯೋಚಿಸಿ ನಿವಾರಣೋಪಾಯಗಳನ್ನು ಕೈಕೊಳ್ಳದಿದ್ದರೆ ತಕ್ಷಣವಲ್ಲದಿದ್ದರೂ ಮುಂಬರುವ ತಲೆಮಾರಿನವರು, ಎಡಬಿಡದೆ ನಡೆದು ಬಂದಿರುವ ಪರಿಸರ ನಾಶಕ್ಕಾಗಿ ಪ್ರಾಯಶ್ಚಿತ್ತ, ಅನುಭವಿಸಲೇಬೇಕಾಗಿ ಬರಬಹುದು. ಇದೊಂದು ವಸ್ತುಸ್ಥಿತಿಯ ಅಧ್ಯಯನವಾಗಿದ್ದರಿಂದ ಬರವಣಿಗೆಯಲ್ಲಿ ಬರುವ ಪಾತ್ರಗಳು ಕಥೆ ಕಾದಂಬರಿಯಲ್ಲಿಯಂತೆ ಕಾಲ್ಪನಿಕವಾಗಿಲ್ಲ’ ಎಂದಿದ್ದಾರೆ.

About the Author

ಕೃಷ್ಣಾನಂದ ಕಾಮತ್
(29 September 1934 - 20 February 2002)

ಖ್ಯಾತ ಸಾಹಿತಿ ಹಾಗೂ ವಿಜ್ಞಾನಿಯಾದ ಕೃಷ್ಣಾನಂದ ಕಾಮತ್ ಅವರು 1934ರ ಸೆಟ್ಪಂಬರ್ 29 ರಂದು ಜನಿಸಿದರು. ಊರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ. ತಂದೆ ಲಕ್ಷ್ಮಣ ವಾಸುದೇವ ಕಾಮತ್, ತಾಯಿ ರಮಾಬಾಯಿ. ಕನ್ನಡದಲ್ಲಿ ಅನೇಕ ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ.  ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೀಟ ವಿಜ್ಞಾನದಲ್ಲಿ ಎಂಎಸ್ಸಿ ಪದವಿ, ಅಮೇರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪರಿಸರ ಮತ್ತು ಅರಣ್ಯ ವಿಜ್ಞಾವ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ರಾಜಸ್ಥಾನದ ಉದಯಪುರ ವಿಶ್ವವಿದ್ಯಾಲಯದ ಜಾಬ್ನೇರ ಕೃಷಿ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್ ವೆಲ್ತ್ ಇನ್ಸ್ಟಿಟ್ಯೂಟ್ ...

READ MORE

Related Books